ರಾಷ್ಟ್ರಪಿತ

ನಿನ್ನ ಎದೆಗೆ ಗುಂಡು ಬಡಿದಾಗ
ಮಣ್ಣು ನಡುಗಿತು ಹಗಲಹೂ ಬಾಡಿತು
ಶಾಂತಿದೂತ ಪಾರಿವಾಳ ಗೂಡು ಸೇರಿತು.

ತಿಳಿವು ತುಂಬಿದ ಕಣ್ಣು ಒಲವು ತುಂಬಿದ ಹೃದಯ
ಛಲವನರಿಯದ ಬದುಕು ಸಾಕು ಇಷ್ಟೇ
ನೆಲವು ನಂದನವಾಗಲಿಕ್ಕೆ
ಮನುಕುಲದ ಇತಿಹಾಸ ರಕ್ತರಂಜಿತ.

ಸರಳತೆ ಸಾಕಾರವಾಯಿತು
ಮಮತೆ ಮೈದೋರಿತು
ಕಾಳಸರ್ಪದ ಹಗೆ ಪಳಗಿಸುವ ಸಲುಗೆ
ಹಾಲಾಹಲ ಕೋಲಾಹಲದ ನಡುವೆ
ಮಂದಹಾಸವು ಬೀರುತ ನಡೆದೆ.

ಬತ್ತಿದ ಮನಗಳಲ್ಲಿ ಅರಿವು ಚಿಮ್ಮುತ್ತ
ಶಾಂತಿ ಸಂದಾನ ಸಮರಸಕೆ ನಾಂದಿ
ಸಂಕೋಲೆಯ ಬಿಡುಗಡೆ ಗಂಟೆ ಮೊಳಗುತ್ತಿತ್ತು.

ನರನ ಮೃಗತ್ವ ಬಾಯಿ ತೆರೆದಿತ್ತು
ನಿನ್ನ ಬಲಿಗೆ ಮಾತೃ ಮನಗಳು ಮರುಗಿದವು
ಕರಳು ಬಳ್ಳಿಗಳು ಕೊರಗಿದವು
ಇದೆಂಥ ಬಲಿ… ಸಾವು… ಹತ್ಯೆ…
ಇನ್ನೆಷ್ಟು??
ಬಾನು… ಭೂಮಿ ಗುಡುಗಿತು.

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂತರಗಟ್ಟೆವ್ವ (ಬೀದಿ ನಾಟಕದ ಹಾಡು)
Next post ಬೆಟ್ಟಗಳ ನಡುವಲಿ

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

cheap jordans|wholesale air max|wholesale jordans|wholesale jewelry|wholesale jerseys